Thursday, September 10, 2015

Public Hero | Chandre Gowda From Chikmagalur | Sep 9th, 2015

ಪಬ್ಲಿಕ್ ಟಿವಿ ರಂಗನಾಥ್ ತಂಡಕ್ಕೆ ಧನ್ಯವಾದಗಳು ಕೆಲವು. ಕೃಷಿಕರ ಸಮಸ್ಯೆಗೆ ನಿಮ್ಮ ಕಾರ್ಯಕ್ರಮ ತುಂಬಾ ಉಪಯುಕ್ತವಾಗಿದೆ. ಕೃಷಿಕರ ಸಮಸ್ಯೆಗೆ ರಾಜ್ಯದ, ಕೇಂದ್ರದ ನಾಯಕರ ಗಮನ ಸೆಳೆಯಲು ಮಾಧ್ಯಮಗಳಿಂದ ಮಾತ್ರ ಸಾಧ್ಯ. ಮಾಧ್ಯಮದವರು ಮನಸ್ಸ್ಸು ಮಾಡಿದರೆ ಕೋಟ್ಯಂತರ ರೈತರ ಸಂಕಷ್ಟಕ್ಕೆ ಧ್ವನಿಯಾಗಬಹುದು. ಮುಖ್ಯವಾಗಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯ ಅರ್ಧ ಬೆಲೆಯೂ ಸಿಗುವುದಿಲ್ಲ. ಈ ಸಮಸ್ಯೆಗೆ ನಾಯಕರ ಗಮನ ಸೆಳೆದು ಉದಾಹರಣೆ ಸಮೇತ ತೋರಿಸುವ ತಾಕತ್ತು ಮಾಧ್ಯಮಗಳಿಗೆ ಮಾತ್ರ ಇದೆ. ಆಡಳಿತ ನಡೆಸಲು ಕಿತ್ತಾಡುವ ನಾಯಕರ ಗಮನ ಅಧಿಕಾರದ ಗದ್ದುಗೆಗೆ ಮಾತ್ರ ಎಂಬಂತಾಗಿದೆ. ನೀವುಗಳು ಚಾಟಿ ಬೀಸಿದರೆ ಸ್ವಲ್ಪ ಇತ್ತಲೂ ಗಮನ ಹರಿಸಬಹುದಲ್ಲವೇ ? ಧನ್ಯವಾದಗಳು.